to
Posted on 30/12/2023

ಮಲಗೊಪ್ಪದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಸಾಮೂಹಿಕ ನಾಯಕತ್ವದಲ್ಲಿ ಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯನ್ನು ತಕ್ಷಣವೇ ಕರೆದು ಭದ್ರಾ ಬಲ ದಂಡೆ ಮತ್ತು ಎಡದಂಡೆಯ ನಾಲೆಗಳಿಗೆ ಜನವರಿ ಒಂದನೇ ತಾರೀಖಿನಿಂದಲೇ ನೀರು ಹರಿಸುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ ಮತ್ತು ಸತ್ಯಾಗ್ರಹವನ್ನು ಕೈಗೊಳ್ಳಲಾಗಿತ್ತು.

Posted on 27/12/2023

ಮಲವಗೊಪ್ಪದ ಶ್ರೀ ರಾಮ ಮಂದಿರ ಟ್ರಸ್ಟ್ ನಿಂದ ಆಯೋಜಿಸಿದ್ದ ಕನ್ನಡ ರಾಜ್ಯೋಸ್ತವದ ಧ್ವಜಾರೋಹಣ ನೆರೆವೇರಿಸಿದ ಕ್ಷಣ.

Posted on 27/12/2023

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ಜಿಲ್ಲಾ ಕೃಷಿಕರ ಸಮಾಜ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸಿರಿದಾನ್ಯ ಹಬ್ಬ 2023ರ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿ ಅಭಿನಂದನೆ ಸ್ವೀಕರಿಸಿದ ಕ್ಷಣ.

Posted on 26/12/2023

ಶಿವಮೊಗ್ಗ ಗ್ರಾಮಾಂತರದ ಹುಣಸೂಡಿನಲ್ಲಿ ಸುಮಾರು 40 ವರ್ಷಗಳಿಂದ ಕೃಷಿಗೆ ಬಳಸುತ್ತಿದ್ದ ರೈತರ ಜಮೀನನ್ನು ಅರಣ್ಯ ಇಲಾಖೆಯವರು ಗ್ರೀನ್ ಜೋನ್ ಎಂದು ಟ್ರಂಚ್ ಹೊಡಿಯಲು ಮುಂದಾದಾಗ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ತಡೆಯಾಜ್ನೆ ನೀಡಿ, ಟ್ರಂಚ್ ಹೊಡಿಯುವ ಕೆಲಸವನ್ನು ನಿಲ್ಲಿಸಿ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಸಮಸ್ಯೆಯ ಬಗ್ಗೆ ಮಾತನಾಡಲಾಗಿದೆ.

Posted on 24/12/2023

ಪದವೀಧರರ ಸಹಕಾರ ಸಂಘದ 2024ರ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ ಕ್ಷಣ

Posted on 22/12/2023

ಶಿವಮೊಗ್ಗ ಮೀನುಗಾರಿಕೆ ಉಪನಿರ್ದೇಶಕರ ಕಛೇರಿಯಲ್ಲಿ 2023-24ನೇ ಸಾಲಿನ ಮೀನುಗಾರಿಕೆ ಇಲಾಖೆಯಿಂದ ಕೊಡಲಾಗುವ ಮೀನುಗಾರಿಕೆ ಸಲಕರಣೆ ಕಿಟ್, ಸೇಫ್ ಜಾಕೆಟ್ಸ್ ಹಾಗೂ ಹರಿಗೋಲನ್ನು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮೀನುಗಾರರಿಗೆ ವಿತರಿಸಲಾಯಿತು.

Posted on 06/12/2023

ಬೆಳಗಾವಿಯಲ್ಲಿ ಅಂಬೇಡ್ಕರ್ ಪುತ್ತಳಿಗೆ @H D Kumaraswamy ಅಣ್ಣನ ಜೊತೆಗೂಡಿ ಪುಷ್ಪಾರ್ಚನೆ ಮಾಡಿದ ಸಂದರ್ಭ

Posted on 02/12/2023

ಕಲ್ಲುಕೊಪ್ಪ ಗ್ರಾಮದಲ್ಲಿ ದುರಸ್ತಿಯಲ್ಲಿರು ಚೆಕ್ ಡ್ಯಾಮ್ ನ ಪರಿಶೀಲನೆ ಮಾಡಿ, ಗ್ರಾಮದಲ್ಲಿ ಪ್ರಗತಿಯಲ್ಲಿರುವ ಜಲಜೀವನ್ ಮಿಷನ್ (JJM) ಕಾಮಗಾರಿಗಳ ಪರಿಶೀಲನೆ ಮಾಡಲಾಯಿತು ಹಾಗೂ ಸಂಬಂಧಪಟ್ಟ ಮಾಹಿತಿ ಕುರಿತು ಗ್ರಾಮಸ್ಥರೊಂದಿಗೆ ಚರ್ಚಿಸಲಾಯಿತು.

-->